ಪ್ರತಿಧ್ವನಿ ಯಲ್ಲಾಪುರ : 17 ವರ್ಷ ವಯೋಮಿತಿಯ ಒಳಗಿನ ಮಂಚಿಕೆರೆ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭರತನಹಳ್ಳಿ ಪ್ರಗತಿ ವಿದ್ಯಾಲಯಕ್ಕೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಲಭಿಸಿದೆ. ವೈಯಕ್ತಿಕ ವಿಭಾಗದಲ್ಲಿ ಬಾಲಕ, ಬಾಲಕಿಯರ 100m ಓಟಗಳು ಪ್ರಥಮಉದ್ದ ಜಿಗಿತಗಳು ಪ್ರಥಮ,ಬಾಲಕಿಯರ 400m ಹರ್ಡಲ್ಸ್, ಉದ್ದ ಜಿಗಿತ, ತ್ರಿವಿಧ ಜಿಗಿತಗಳು ಪ್ರಥಮ,ಬಾಲಕ ಬಾಲಕಿಯರ 200m ಓಟ, ರೀಲೆಗಳು ದ್ವಿತೀಯಬಾಲಕರ 200m ಓಟ, ಹರ್ಡಲ್ಸ್ ,ಎತ್ತರ ಜಿಗಿತಬಾಲಕ ಬಾಲಕಿಯರ ಭರ್ಜಿ ಎಸೆತದಲ್ಲಿ ತೃತೀಯ,ನಡಿಗೆ, ಚಕ್ರ ಎಸೆತ, …
Read More »ಗ್ರಾಮ ಮಟ್ಟದಿಂದಲೆ “ಭಾರತ್ ಜೋಡೋ” ಬಲಿಷ್ಠವಾಗಿಸಲು ಯುವಕರನ್ನು ಹೆಚ್ಚಾಗಿ ತೊಡಗಿಸಿ – ಹೆಬ್ಬಾರ್.
ಪ್ರತಿಧ್ವನಿ ಯಲ್ಲಾಪುರ : ಭಾರತ್ ಜೋಡೋ ಹಾಗೂ ಎಸ್ಐಆರ್ನ 2ನೇ ಹಂತದ ಕಾರ್ಯಚಟುವಟಿಕೆಗಳ ಕುರಿತು ಮಾನ್ಯ ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಇಂದು ಯಲ್ಲಾಪುರ ಪಟ್ಟಣದ ಕಾರ್ಯಾಲಯದಲ್ಲಿ ಯಲ್ಲಾಪುರ, ಮುಂಡಗೋಡ ಹಾಗೂ ಬನವಾಸಿ ಭಾಗದ ಪ್ರಮುಖರ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕರು,ಭಾರತ್ ಜೋಡೋ ಯುವ ಸಂಘದ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಸಂಘಟನೆಯೊಂದಿಗೆ ಸಂಪರ್ಕಿಸಿ, ಗ್ರಾಮ ಮಟ್ಟದಿಂದಲೇ ಸಂಘಟನೆಯನ್ನು ಪರಿಣಾಮಕಾರಿಯಾಗಿ ಕಟ್ಟುವ ಅಗತ್ಯವನ್ನು ತಿಳಿಸಿದರು ಹಾಗೂ ಸದಸ್ಯರ …
Read More »ಬಸ್ ಅಪಘಾತದಲ್ಲಿ ಗಾಯಗೊಂಡವರಿಗೆ ಸಾಂತ್ವನ ಹೇಳಿದ ಶಾಸಕ ಹೆಬ್ಬಾರ್ ಮತ್ತು ಪುತ್ರ ವಿವೇಕ್ ಹೆಬ್ಬಾರ್.
ಪ್ರತಿಧ್ವನಿ ಯಲ್ಲಾಪುರ : ಮುಂಡಗೋಡ ತಾಲ್ಲೂಕಿನ ಶಿಡ್ಲಗುಂಡಿ ಗ್ರಾಮದಲ್ಲಿ ಬುಧವಾರ ಎರಡು ಸಾರಿಗೆ ಬಸ್ಗಳು ಮುಖಾಮುಖಿ ಡಿಕ್ಕಿಯಾಗಿ, ಬಸ್ ಚಾಲಕ ಸೇರಿದಂತೆ ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡು ಯಲ್ಲಾಪುರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಕೆಲವು ಪ್ರಯಾಣಿಕರನ್ನು ಶಾಸಕರಾದ ಶಿವರಾಮ ಹೆಬ್ಬಾರ್ ಮತ್ತು ಪುತ್ರ ವಿವೇಕ್ ಹೆಬ್ಬಾರ್ ಅವರು ಗುರುವಾರ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು. ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ …
Read More »ದೇಶದ ಪ್ರಧಾನಿ,ಅರಣ್ಯ ಸಚಿವರು ಮತ್ತು ಸಚಿವಾಲಯದ ಕಾರ್ಯದರ್ಶಿಯವರಿಗೆ ಪಶ್ಚಿಮ ಘಟ್ಟಗಳ ವಿಚಾರದಲ್ಲಿ ಮದ್ಯ ಪ್ರವೇಶಿಸುವಂತೆ ಚಂದ್ರಕಾಂತ ಕೊಚರೇಕರ್ ಮನವಿ
ಪ್ರತಿಧ್ವನಿ ಯಲ್ಲಾಪುರ : ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವ ಸಂಬಂಧ 27-07-2026ರಂದು ಹೊರಡಿಸಲಾದ ಅಧಿಸೂಚನೆಗೆ ನಮ್ಮ ಆಕ್ಷೇಪಣೆಯನ್ನು ಪರಿಗಣಿಸಿ, ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಜಿಲ್ಲಾ ಅರಣ್ಯ ಸಾಗುವಳಿದಾರರ ಜಿಲ್ಲಾ ವೇದಿಕೆ ಅಧ್ಯಕ್ಷ ಚಂದ್ರಕಾಂತ ಕೋಚರೆಕರ್ ಅವರುಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಭಾರತ ಸರ್ಕಾರ, ನವದೆಹಲಿಯ ಕಾರ್ಯದರ್ಶಿಗಳಿಗೆ ಲಿಖಿತ ರೂಪದಲ್ಲಿ ಪತ್ರ ಬರೆದಿದ್ದಾರೆ. ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಲ್ಲಿ …
Read More »ಯಲ್ಲಾಪುರದಲ್ಲಿ ಅತ್ಯಂತ ಸಂಭ್ರಮದಿ ಆಚರಿಸಿದ ಈದ್-ಮಿಲಾದ್ ಪೊಲೀಸರ ಬಿಗಿ ಬಂದೋಬಸ್ತ್.
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿ ಮುಸ್ಲಿಂ ಸಮುದಾಯದ ಪವಿತ್ರ ಈದ್ ಮಿಲಾದ್ ಆಚರಣೆ ಅತ್ಯಂತ ಯಶಸ್ವಿಯಾಗಿ ನಡೆಯಿತು. ಪಟ್ಟಣದ ಮೂಲೆ ಮೂಲೆಯಲ್ಲು ಅಲಂಕಾರ ಜೋರಾಗಿತ್ತು. ಮುಸ್ಲಿಂ ಸಮುದಾಯದ ಮಕ್ಕಳು,ಹಿರಿಯರು ಸಹ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿದರು. ಅಲ್ಲಲ್ಲಿ ತಂಪು ಪಾನಿಯದ ಸೇವೆ ಬಲು ವ್ಯವಸ್ಥಿತವಾಗಿ ಆಯೋಜಿಸಲಾಗಿತ್ತು.ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಯಲ್ಲಾಪುರ ಪೊಲೀಸರ ಬಂದೋಬಸ್ತ್ ಬಿಗಿಯಾಗಿತ್ತು.
Read More »ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಕ್ಕೆ ಒಪ್ಪಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದವರಿಗೆ ಅಭಿನಂದನೆ – ವಿವೇಕ್ ಹೆಬ್ಬಾರ್.
ಪ್ರತಿಧ್ವನಿ ಯಲ್ಲಾಪುರ : ಹನುಮಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಅರ್ಜುನ ಬಂಡಿವಡ್ಡರ್ ಹಾಗೂ ಹುನಗುಂದದ ಬಿಜೆಪಿ ಮುಖಂಡರಾದ ಧರಣೇಂದ್ರ ಹೊಂಡದಗಟ್ಟಿ ಅವರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಕೆಪಿಸಿಸಿ ಸದಸ್ಯರಾದ ವಿವೇಕ್ ಹೆಬ್ಬಾರ್ ಅವರು ಅರ್ಜುನ ಬಂಡಿವಡ್ಡರ್ ಹಾಗೂ ಧರಣೇಂದ್ರ ಹೊಂಡದಗಟ್ಟಿ ಅವರಿಗೆ ಕಾಂಗ್ರೆಸ್ ಪಕ್ಷದ ಶಾಲು ಹೊದಿಸಿ, ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ವಿವೇಕ್ ಹೆಬ್ಬಾರ್ ಅವರು, ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ …
Read More »ಯಲ್ಲಾಪುರ ತಾಲೂಕಿನ ಕೊಡಸೆಯಲ್ಲಿ ನಡೆದ ಕಣ್ಣಿನ ತಪಾಸಣೆ ಶಿಭಿರ ಅತ್ಯಂತ ಯಶಸ್ವಿ – ರವಿ ಕೈಟ್ಕರ್
ಪ್ರತಿಧ್ವನಿ ಯಲ್ಲಾಪುರ :ದೇಹದಲ್ಲಿ ಸರ್ವ ಅಂಗಗಳು ಪ್ರಾಮುಖ್ಯವೆ ಅದರಲ್ಲೂ ಕಣ್ಣಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಜಗತ್ತನ್ನು ದರ್ಶಿಸುವುದು ಕಣ್ಣಿನಿಂದಲೆ ಅಂತಹ ಕಣ್ಣಿನ ಬಗ್ಗೆ ಪ್ರತಿಯೊಬ್ಬರು ಜಾಗ್ರತೆ ವಹಿಸಿ ಕಾಲಕಾಲಕ್ಕೆ ತಪಾಸಣೆಯೊಂದಿಗೆ ಹಾರೈಕೆ ಅತಿ ಮುಖ್ಯ ವಾಗಿದೆ ಇಂತಹ ಸಾರ್ಥಕ ಸೇವಾ ಈ ಭಾಗದ ಜನರಿಗೆ ಅನುಕೂಲ ಆಗಿದೆ,ಕಣ್ಣಿನ ಸಮಸ್ಯೆಗೆ ದೂರದ ಮಹಾನಗರ ಗಳಿಗೆ ತಲುಪುವುದು ಅಸಾಧ್ಯ ವಾಗಿತ್ತು ಊರಿನಲ್ಲಿ ಯೇ ಕಣ್ಣಿನ ತಪಾಸಣೆ ಮಾಡಿದ್ದಕ್ಕೆ ಸಂಘಟಕರಿಗೆ ಧನ್ಯವಾದ ಅರ್ಪಿಸುವೆ ಎಂದು …
Read More »ರೈತ ಮಕ್ಕಳಂತೆ ಬೆಳೆದ ಅಡಿಕೆ ಮರ ಕಡಿಯುವ ಹಕ್ಕು ಅರಣ್ಯ ಇಲಾಖೆಗಿಲ್ಲ ಇಂತಹ ನಡೆ ಖಂಡನಾರ್ಹ – ಅನಂತಮೂರ್ತಿ ಹೆಗಡೆ ಗುಡುಗು.
ಪ್ರತಿಧ್ವನಿ ಯಲ್ಲಾಪುರ – ಅಡಿಕೆ ಮರವನ್ನು ಕಡಿಯುವ ಹಕ್ಕನ್ನು ಅರಣ್ಯ ಇಲಾಖೆಗೆ ಯಾರೂ ಕೊಟ್ಟಿಲ್ಲ.ಮರಗಳನ್ನು ಕುಡಿಯಬೇಕು ಎಂದು ಅರಣ್ಯ ಇಲಾಖೆಯ ಯಾವ ನಿಯಮದಲ್ಲಿದೇ? ಮರವನ್ನು ಉಳಿಸಿ ಬೆಳೆಸುವುದು ಅರಣ್ಯ ಇಲಾಖೆ ಕರ್ತವ್ಯ ಮರಕಡಿಯುವುದಲ್ಲ. ಅರಣ್ಯ ಇಲಾಖೆಯ ಈ ಕ್ರಮವನ್ನು ನಾವು ಖಂಡಿಸುತ್ತೇವೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಅರಣ್ಯ ಇಲಾಖೆ ನಡೆಯ ವಿರುದ್ಧ ಗುಡುಗಿದರು. ಯಲ್ಲಾಪುರ ತಾಲೂಕಿನ ಕುಂದರಗಿ ಪಂಚಾಯತ್ ವ್ಯಾಪ್ತಿಯ ಬೆಳ್ಳಂಬೆಯ ಸದಾಶಿವ ನಾಯ್ಕ …
Read More »ಈದ್-ಮಿಲಾದ್ ಶಾಂತಿಯುತ ಆಚರಣೆಗೆ – ಯಲ್ಲಾಪುರ ಪೊಲೀಸರ ಬಂದೋಬಸ್ತ್ ಪಥ ಸಂಚಲನ.
ಪ್ರತಿಧ್ವನಿ ಯಲ್ಲಾಪುರ : ಶಾಂತಿ ಮತ್ತು ಸೌಹಾರ್ಧತೆಗೆ ಹೆಸರಾದ ಯಲ್ಲಾಪುರ ತಾಲೂಕಿನಲ್ಲಿ ಯಾವುದೆ ಧರ್ಮದ ಹಬ್ಬದಾಚರಣೆ ವೇಳೆ ಅನಿರೀಕ್ಷಿತವಾಗಿ ಯಾವುದೆ ಅಶಾಂತಿ ತಲೆದೂರದಂತೆ ಹಾಗು ಶಾಂತಿ ಸುವ್ಯಸ್ಥೆಗೆ ನಾವಿದ್ದೇವೆ ಎಂಬ ಸಂದೇಶ ಸಾರಲು ಯಲ್ಲಾಪುರ ಪೋಲಿಸರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದರು. ಡಿವೈಎಸ್ಪಿ ಗೀತಾ ಪಾಟೀಲ್ ನೇತೃತ್ವದಲ್ಲಿ,ಪಿ.ಐ ರಮೇಶ್ ಹಾನಾಪುರ,ಪಿಎಸ್ಐಗಳಾದ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ ಅವರೊಂದಿಗೆ ಡಿ.ಆರ್.ಎಫ್, ಹೋಂ ಗಾಡ್೯ ಹಾಗು ಪೊಲೀಸರು ಸೇರಿದಂತೆ 60 …
Read More »ನಿತ್ಯ ಬಳಕೆ ವಸ್ತುಗಳ ದರ ಗಗನಕ್ಕೆ – ಬರಲಿರುವ ಹಬ್ಬಗಳ ಆಚರಣೆ ಕಷ್ಟವೋ ಕಷ್ಟ…
ಪ್ರತಿಧ್ವನಿ ಯಲ್ಲಾಪುರ : ಹಬ್ಬ ಹರಿದಿನಗಳು ಹತ್ತಿರವಾದಂತೆಲ್ಲಾ ದಿನಸಿ, ತರಕಾರಿ, ಈರುಳ್ಳಿ, ಸಕ್ಕರೆ, ಹೂವು ಹಾಗೂ ಹಬ್ಬದ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿ ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ. ಈರುಳ್ಳಿ ದರ ಏರಿಕೆ: ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆ ಕಡಿಮೆಯಾಗಿದ್ದು, ಕೆ.ಜಿಗೆ ₹60ರ ಗಡಿ ದಾಟಿದೆ. ಮುಂಬರುವ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಾಗುವ ಆತಂಕವಿದೆ.ಕಳೆದ ವರ್ಷಕ್ಕಿಂತ ಶೇಕಡ 45ರಷ್ಟು ಹೆಚ್ಚಳಗೊಂಡಿದೆ ಎನ್ನಲಾಗಿದೆ. ಮಾಹಿತಿಯ ಪ್ರಕಾರ ಬೆಂಗಳೂರಿನಲ್ಲಿ ಒಂದು ಕೆಜಿ ಈರುಳ್ಳಿಯು 45 ರಿಂದ …
Read More »
Prathidvani Yellapura